ಮಂಡ್ಯ: ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರುಣ ಅವಕೃಪೆ ತೋರಿದ್ದಾನೆ.ಮಂಡ್ಯದಲ್ಲಿ ಸಂಜೆ ನಂತರ ಭಾರೀ ಮಳೆಯಾಗಿದ್ದು ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಇಂದು ಸಂಜೆ 6 ಗಂಟೆ ನಂತರದಲ್ಲಿ ಮಳೆ ಆರಂಭವಾಗಿದ್ದು ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಬಿಟ್ಟೂ ಬಿಡದೆ ಸುರಿದಿದೆ.

ಇದರಿಂದಾಗಿ ವೇದಿಕೆಯ ಅಕ್ಕಪಕ್ಕದ ಜಾಗ ಸಂಪೂರ್ಣ ಕೆಸರು ಗದ್ದೆಯಂತಾಗಿದೆ.

ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ನೂರಾರು ಜನ ಮಳೆಯಲ್ಲಿ ನನೆದು ಒದ್ದೆಯಾಗಿ ಮಳೆರಾಯನನ್ನು ಶಪಿಸಿದ್ದಾರೆ. ಈ ಧಿಡೀರ್ ಅವ್ಯವಸ್ಥೆಯಿಂದಾಗಿ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದ ಜನ ಕಿರಿಕಿರಿ ಅನುಭವಿಸುವಂತಾಗಿದೆ.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *